ಲೋಕದಲ್ಲಿದೆ ಕಷ್ಟ-ನೋವು
4 | ನಿರೀಕ್ಷೆಯನ್ನು ಕಾಪಾಡಿಕೊಳ್ಳಿ
ಇದು ಯಾಕೆ ಮುಖ್ಯ
ಲೋಕದಲ್ಲಿರೋ ಸಂಕಷ್ಟಗಳನ್ನು ನೋಡಿ ಜನರು ಶಾರೀರಿಕವಾಗಿ ಬಳಲಿ ಹೋಗ್ತಿದ್ದಾರೆ, ಭಾವನಾತ್ಮಕವಾಗಿ ಕುಗ್ಗಿಹೋಗ್ತಿದ್ದಾರೆ. ಇಂಥ ಜನರು ‘ಜೀವನ ಅಂದರೆ ಇಷ್ಟೇನಾ’ ಅಂತ ತುಂಬ ನೊಂದು ಹೋಗಿದ್ದಾರೆ. ಅಂಥವರಲ್ಲಿ ಕೆಲವರು:
-
ಭವಿಷ್ಯದ ಬಗ್ಗೆ ಯೋಚನೆ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ.
-
ಇನ್ನು ಕೆಲವರು ಚಿಂತೆಗಳಿಂದ ಹೊರಬರೋಕೆ ಮದ್ಯಪಾನ ಮತ್ತು ಡ್ರಗ್ಸ್ಗೆ ಬಲಿ ಬಿದ್ದಿದ್ದಾರೆ.
-
ಕೆಲವರು ‘ಇಂಥ ಜೀವನ ಜೀವಿಸೋದಕ್ಕಿಂತ ಸಾಯೋದೇ ಮೇಲು’ ಅಂತ ಅಂದುಕೊಂಡಿದ್ದಾರೆ.
ಈ ಮುಂದಿನ ವಿಷಯವನ್ನು ನೆನಪಿಡಿ
-
ನಾವು ಎದುರಿಸುತ್ತಾ ಇರೋ ಸಮಸ್ಯೆಗಳು ತಾತ್ಕಾಲಿಕವಾಗಿ ಇರಬಹುದು ಅಥವಾ ಸ್ವಲ್ಪ ಸಮಯದಲ್ಲಿ ಸರಿನೂ ಹೋಗಬಹುದು.
-
ನಿಮ್ಮ ಪರಿಸ್ಥಿತಿಗಳು ಬದಲಾಗದೆ ಇದ್ದರೂ ಅದನ್ನು ಎದುರಿಸೋಕೆ ನೀವು ಕೆಲವೊಂದು ಹೆಜ್ಜೆಗಳನ್ನ ತೆಗೆದುಕೊಳ್ಳಬಹುದು.
-
ನಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗುತ್ತೆ ಅಂತ ಬೈಬಲ್ ನಮಗೆ ನಿರೀಕ್ಷೆ ಕೊಡುತ್ತೆ.
ಈಗ ನೀವೇನು ಮಾಡಬಹುದು
ಬೈಬಲಲ್ಲಿ ಹೀಗಿದೆ: “ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34.
ನಾಳೆ ಬಗ್ಗೆ ಅತಿಯಾಗಿ ಚಿಂತಿಸಬೇಡಿ. ಹಾಗೆ ಮಾಡಿದ್ರೆ ಇವತ್ತಿನ ಕೆಲಸವನ್ನ ಚೆನ್ನಾಗಿ ಮಾಡೋಕೆ ಆಗಲ್ಲ.
ಮುಂದೆ ನಡೆಯದೇ ಇರೋ ವಿಷಯಗಳ ಬಗ್ಗೆ ‘ಅಯ್ಯೋ, ಹೀಗೆನಾದ್ರು ಆಗಿಬಿಟ್ರೆ’ ಅಂತ ನಾವು ನಕಾರಾತ್ಮಕವಾಗಿ ಯೋಚನೆ ಮಾಡಿದರೆ ನಮ್ಮ ಒತ್ತಡನೂ ಜಾಸ್ತಿ ಆಗುತ್ತೆ ಮತ್ತು ಬಲನೂ ಕಮ್ಮಿ ಆಗುತ್ತೆ. ಮುಂದೆ ಇರೋ ನಿರೀಕ್ಷೆನೂ ನಾವು ಕಳಕೊಳ್ಳುತ್ತೀವಿ.
ಬೈಬಲ್ ನಮಗೆ ಕೊಡೋ ನಿಜ ನಿರೀಕ್ಷೆ
ದೇವರ ಸೇವಕ ಪ್ರಾರ್ಥನೆಯಲ್ಲಿ ಹೀಗೆ ಹೇಳಿದ: “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.” (ಕೀರ್ತನೆ 119:105) ದೇವರ ವಾಕ್ಯವಾದ ಬೈಬಲ್ ನಿಜವಾಗಲೂ ನಮ್ಮ ಜೀವನದಲ್ಲಿ ಹೇಗೆ ಬೆಳಕಾಗಿದೆ?
ಕತ್ತಲಲ್ಲಿ ನಮ್ಮ ಹತ್ತಿರ ಟಾರ್ಚ್ ಇದ್ರೆ ಸರಿಯಾದ ಕಡೆ ಹೆಜ್ಜೆ ಇಡೋಕೆ ನಮಗೆ ಸಹಾಯ ಆಗುತ್ತೆ. ಅದೇ ರೀತಿ ಸರಿಯಾದ ನಿರ್ಣಯಗಳನ್ನು ಮಾಡೋಕೆ ನಮಗೆ ಬೈಬಲ್ನಲ್ಲಿರೋ ವಿವೇಕ ಸಹಾಯ ಮಾಡುತ್ತೆ.
ನಮ್ಮ ಹತ್ತಿರ ಟಾರ್ಚ್ ಇದ್ರೆ ದೂರದ ವರೆಗೂ ದಾರಿ ನಮಗೆ ಚೆನ್ನಾಗಿ ಕಾಣಿಸುತ್ತೆ. ಅದೇ ರೀತಿ ಭವಿಷ್ಯದಲ್ಲಿ ನಮ್ಮ ಮುಂದೆ ಇರೋ ನಿರೀಕ್ಷೆ ಕಡೆಗೆ ಬೈಬಲ್ ನಮ್ಮನ್ನು ನಡಿಸುತ್ತೆ.