ರೋಮನ್ನರಿಗೆ ಬರೆದ ಪತ್ರ 9:1-33

  • ಇಸ್ರಾಯೇಲ್ಯರನ್ನ ನೆನಸಿ ಪೌಲ ದುಃಖಿಸಿದ (1-5)

  • ಅಬ್ರಹಾಮನ ನಿಜವಾದ ಸಂತತಿ (6-13)

  • ದೇವರು ಮಾಡೋ ಆಯ್ಕೆಯನ್ನ ಪ್ರಶ್ನಿಸಕ್ಕಾಗಲ್ಲ (14-26)

    • ಶಿಕ್ಷೆಗೆ, ಕರುಣೆಗೆ ಯೋಗ್ಯವಾದ ಪಾತ್ರೆಗಳು (22, 23)

  • ಸ್ವಲ್ಪ ಜನ ಮಾತ್ರ ರಕ್ಷಣೆ ಪಡಿತಾರೆ (27-29)

  • ಇಸ್ರಾಯೇಲ್ಯರು ಎಡವಿದ್ರು (30-33)

9  ಕ್ರಿಸ್ತನ ಶಿಷ್ಯನಾಗಿರೋ ನಾನು ಸತ್ಯ ಹೇಳ್ತಾ ಇದ್ದೀನಿ, ಸುಳ್ಳು ಹೇಳ್ತಿಲ್ಲ. ಇದಕ್ಕೆ ಪವಿತ್ರಶಕ್ತಿ ಮಾರ್ಗದರ್ಶಿಸ್ತಿರೋ ನನ್ನ ಮನಸ್ಸಾಕ್ಷಿನೇ ಸಾಕ್ಷಿ.  ನನ್ನ ಹೃದಯ ದುಃಖ ನೋವಿಂದ ತುಂಬ ಭಾರವಾಗಿದೆ, ಸ್ವಲ್ಪನೂ ಹಗುರ ಆಗ್ತಿಲ್ಲ.  ನನ್ನ ಸಹೋದರರಾಗಿರೋ ನನ್ನ ಸ್ವದೇಶದವ್ರಿಗೆ ಸಹಾಯ ಆಗೋದಾದ್ರೆ ನಾನೇ ಕ್ರಿಸ್ತನಿಂದ ದೂರ ಆಗಿ ಶಾಪ ಪಡಿಯೋಕೆ ಸಿದ್ಧವಾಗಿದ್ದೀನಿ.  ಅವರು ಇಸ್ರಾಯೇಲ್ಯರು, ದೇವರು ಅವ್ರನ್ನ ಮಕ್ಕಳಾಗಿ ದತ್ತು ತಗೊಂಡನು,+ ಮಹಿಮೆ ಪಡಿಸಿದನು, ಅವ್ರ ಜೊತೆ ಒಪ್ಪಂದಗಳನ್ನ ಮಾಡಿದನು,+ ನಿಯಮಗಳನ್ನ,+ ಪವಿತ್ರ ಸೇವೆ ಮಾಡೋ ಅವಕಾಶ ಕೊಟ್ಟನು,+ ಅವ್ರಿಗೆ ಭವಿಷ್ಯದ ಬಗ್ಗೆ ಮಾತು ಕೊಟ್ಟನು.+  ಅವರು ನಮ್ಮ ಪೂರ್ವಜರ ವಂಶದವರು,+ ಅವ್ರ ವಂಶದಲ್ಲೇ ಕ್ರಿಸ್ತ ಮನುಷ್ಯನಾಗಿ ಹುಟ್ಟಿದನು.+ ಎಲ್ಲವನ್ನ ಆಳೋ ದೇವ್ರಿಗೆ ಯಾವಾಗ್ಲೂ ಸ್ತುತಿ ಸಲ್ಲಲಿ. ಆಮೆನ್‌.  ಆದ್ರೆ ದೇವರ ಮಾತು ನಡಿಲಿಲ್ಲ ಅಂತ ಇದರರ್ಥ ಅಲ್ಲ. ಯಾಕಂದ್ರೆ ಇಸ್ರಾಯೇಲನಿಂದ ಹುಟ್ಟಿದವ್ರೆಲ್ಲ ನಿಜವಾಗ್ಲೂ ಇಸ್ರಾಯೇಲ್ಯರಲ್ಲ.+  ಅಬ್ರಹಾಮನ ಸಂತತಿಯಲ್ಲಿ ಹುಟ್ಟಿದ್ದಾರೆ ಅಂದ ತಕ್ಷಣ ಅವರೆಲ್ಲ ನಿಜವಾಗ್ಲೂ ಅವನ ಮಕ್ಕಳಾಗಲ್ಲ.+ ದೇವರು ಅಬ್ರಹಾಮನಿಗೆ “ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ” ಅಂದನು.+  ಇದು ಏನು ತೋರಿಸುತ್ತೆ ಅಂದ್ರೆ, ಅಬ್ರಹಾಮನ ಮಕ್ಕಳೆಲ್ಲ ನಿಜವಾಗ್ಲೂ ದೇವರ ಮಕ್ಕಳಲ್ಲ.+ ಬದಲಾಗಿ ದೇವರು ಕೊಟ್ಟ ಮಾತಿಂದ ಹುಟ್ಟಿದ ಮಕ್ಕಳೇ+ ನಿಜವಾದ ಮಕ್ಕಳು.  “ಮುಂದಿನ ವರ್ಷ ಇದೇ ಸಮಯಕ್ಕೆ ನಾನು ಬರ್ತಿನಿ. ಆಗ ಸಾರಾಗೆ ಒಬ್ಬ ಮಗ ಇರ್ತಾನೆ” ಅಂತ ದೇವರು ಮಾತು ಕೊಟ್ಟನು.+ 10  ನಮ್ಮ ಪೂರ್ವಜ ಇಸಾಕನಿಂದ ರೆಬೆಕ್ಕ ಗರ್ಭಿಣಿ ಆಗಿದ್ದಾಗ್ಲೂ ಇದೇ ತರ ಆಯ್ತು. ಅವಳ ಹೊಟ್ಟೇಲಿ ಅವಳಿ ಮಕ್ಕಳಿದ್ರು.+ 11  ಅವರಿಬ್ರು ಹುಟ್ಟೋಕೆ ಮುಂಚೆನೇ, ಒಳ್ಳೇದಾಗಲಿ ಕೆಟ್ಟದಾಗಲಿ ಮಾಡೋ ಮುಂಚೆನೇ ದೇವರು ಅವ್ರಲ್ಲಿ ಯಾರನ್ನ ಆರಿಸ್ಕೊಳ್ತೀನಿ ಅಂತ ಹೇಳಿದನು. ಯಾಕಂದ್ರೆ ದೇವರು ಮನುಷ್ಯರನ್ನ ಅವ್ರ ಕೆಲಸಗಳನ್ನ ನೋಡಿ ಆರಿಸ್ಕೊಳ್ಳಲ್ಲ, ತನಗೆ ಇಷ್ಟ ಆದವ್ರನ್ನ ಆರಿಸ್ಕೊಳ್ತಾನೆ. 12  ದೇವರು ಅವಳಿಗೆ “ದೊಡ್ಡವನು ಚಿಕ್ಕವನ ದಾಸನಾಗಿ ಇರ್ತಾನೆ”+ ಅಂದನು. 13  “ನಾನು ಯಾಕೋಬನನ್ನ ಪ್ರೀತಿಸಿದೆ, ಏಸಾವನನ್ನ ದ್ವೇಷಿಸಿದೆ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. 14  ಹಾಗಾದ್ರೆ ದೇವರು ಅನ್ಯಾಯ ಮಾಡ್ತಾನೆ ಅಂತ ನಾವು ಹೇಳ್ತಿದ್ದೀವಾ? ನಿಜವಾಗ್ಲೂ ಇಲ್ಲ!+ 15  ಯಾಕಂದ್ರೆ ದೇವರು ಮೋಶೆಗೆ “ನಾನು ಯಾರಿಗೆ ಕರುಣೆ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕರುಣೆ ತೋರಿಸ್ತೀನಿ. ನಾನು ಯಾರಿಗೆ ಕನಿಕರ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕನಿಕರ ತೋರಿಸ್ತೀನಿ” ಅಂತ ಹೇಳಿದನು.+ 16  ಹಾಗಾಗಿ ಒಬ್ಬನ ಆಸೆ ಅಥವಾ ಪ್ರಯತ್ನ ನೋಡಿ ದೇವರು ಅವನನ್ನ ಆರಿಸ್ಕೊಳ್ಳಲ್ಲ, ತಾನು ಕರುಣೆ ತೋರಿಸೋಕೆ ಇಷ್ಟಪಡೋ ವ್ಯಕ್ತಿಯನ್ನೇ ಆರಿಸ್ಕೊಳ್ತಾನೆ.+ 17  ಫರೋಹನ ಬಗ್ಗೆ ವಚನ ಏನು ಹೇಳುತ್ತೆ ಅಂದ್ರೆ “ನನ್ನ ಶಕ್ತಿಯನ್ನ ನಿನಗೆ ತೋರಿಸಬೇಕು ಮತ್ತು ನನ್ನ ಹೆಸ್ರನ್ನ ಇಡೀ ಭೂಮಿಗೆ ಗೊತ್ತಾಗೋ ತರ ಮಾಡಬೇಕು ಅಂತಾನೇ ನಾನು ನಿನ್ನನ್ನ ಇನ್ನೂ ಜೀವಂತವಾಗಿ ಉಳಿಸಿದ್ದೀನಿ.”+ 18  ಹಾಗಾಗಿ ದೇವರು ಆತನಿಗೆ ಇಷ್ಟ ಆದವ್ರಿಗೆ ಕರುಣೆ ತೋರಿಸ್ತಾನೆ, ಆದ್ರೆ ಯಾರು ಮನಸ್ಸನ್ನ ಕಲ್ಲು ಮಾಡ್ಕೊಳ್ಳೋಕೆ ಇಷ್ಟಪಡ್ತಾರೋ ಅವರು ಹಾಗೇ ಆಗೋಕೆ ಬಿಡ್ತಾನೆ.+ 19  ನಿಮ್ಮಲ್ಲಿ ಕೆಲವರು “ದೇವರ ಇಷ್ಟವನ್ನ ವಿರೋಧಿಸೋಕೆ ಯಾರಿಂದಾನೂ ಆಗಲ್ಲ ಅಂದ್ಮೇಲೆ ನಾವು ಮಾಡೋದು ತಪ್ಪು ಅಂತ ಆತನು ಯಾಕೆ ಹೇಳ್ತಾನೆ?” ಅಂತ ನನ್ನನ್ನ ಕೇಳಬಹುದು. 20  ಮನುಷ್ಯನೇ, ದೇವರಿಗೆ ಎದುರುತ್ತರ ಕೊಡೋಕೆ ನೀನ್ಯಾರು?+ ಮಣ್ಣಿನ ಮಡಿಕೆ ತನ್ನನ್ನ ಮಾಡಿದವನಿಗೆ “ನೀನು ನನ್ನನ್ನ ಹೀಗ್ಯಾಕೆ ಮಾಡ್ದೆ” ಅಂತ ಕೇಳೋಕೆ ಆಗುತ್ತಾ?+ 21  ಒಂದೇ ಮಣ್ಣಿನ ಮುದ್ದೆಯಿಂದ ಒಂದು ಚೆನ್ನಾಗಿರೋ* ಪಾತ್ರೆನ, ಇನ್ನೊಂದು ಮಾಮೂಲಿ* ಪಾತ್ರೆನ ಮಾಡೋಕೆ ಕುಂಬಾರನಿಗೆ ಅಧಿಕಾರ ಇಲ್ವಾ?+ 22  ಅದೇ ತರ ದೇವರಿಗೂ ಅಧಿಕಾರ ಇದೆ. ಶಿಕ್ಷೆಗೆ ಮತ್ತು ನಾಶಕ್ಕೆ ಯೋಗ್ಯವಾದ ಪಾತ್ರೆಗಳ ತರ ಇದ್ದ ಕೆಟ್ಟ ಜನ್ರ ಮೇಲೆ ದೇವರು ತನ್ನ ಕೋಪ, ಶಕ್ತಿ ತೋರಿಸಬೇಕಂತ ಅಂದ್ಕೊಂಡ್ರೂ ಅವ್ರನ್ನ ತುಂಬ ತಾಳ್ಮೆಯಿಂದ ಸಹಿಸ್ಕೊಂಡನು. 23  ಕರುಣೆಗೆ ಯೋಗ್ಯವಾದ ಪಾತ್ರೆಗಳ ತರ ಇದ್ದ ಜನರಿಗೆ ತನ್ನ ಮಹಾ ಮಹಿಮೆಯನ್ನ ತೋರಿಸೋಕಂತ ಆತನು ಹಾಗೆ ಸಹಿಸ್ಕೊಂಡನು.+ ಆ ಜನ್ರು ಮಹಿಮೆ ಪಡಿಯೋಕೆ ಆತನು ಅವ್ರನ್ನ ಮೊದ್ಲೇ ಸಿದ್ಧಮಾಡಿದ್ದನು. 24  ದೇವರು ಆ ಜನ್ರನ್ನ ಯೆಹೂದ್ಯರಿಂದ ಅಷ್ಟೇ ಅಲ್ಲ ಬೇರೆ ಜನಾಂಗಗಳಿಂದಾನೂ ಕರೆದನು.+ ನಾವೇ ಆ ಜನ್ರು. 25  ಇದು ಹೋಶೇಯನ ಪುಸ್ತಕದಲ್ಲಿ ದೇವರು ಮೊದ್ಲೇ ಹೇಳಿದ್ದ ತರ ಇದೆ. ಏನಂದ್ರೆ “ನನ್ನ ಜನರಲ್ಲದವ್ರನ್ನ+ ‘ನನ್ನ ಜನ್ರು’ ಅಂತ, ನಾನು ಪ್ರೀತಿಸದವಳನ್ನ ‘ಪ್ರಿಯೆ’+ ಅಂತ ಕರಿತೀನಿ. 26  ‘ನೀವು ನನ್ನ ಜನ್ರಲ್ಲ’ ಅಂತ ನಾನು ಎಲ್ಲಿ ಅವ್ರಿಗೆ ಹೇಳಿದ್ನೋ ಅದೇ ಜಾಗದಲ್ಲಿ ನಾನು ಅವ್ರಿಗೆ ‘ನೀವು ಜೀವ ಇರೋ ದೇವರ ಮಕ್ಕಳು’ ಅಂತ ಹೇಳ್ತೀನಿ.”+ 27  ಅಷ್ಟೇ ಅಲ್ಲ, ಇಸ್ರಾಯೇಲ್ಯರ ಬಗ್ಗೆ ಯೆಶಾಯ “ಇಸ್ರಾಯೇಲ್ಯರ ಸಂಖ್ಯೆ ಸಮುದ್ರದ ಮರಳಿನಷ್ಟು ಇದ್ರೂ ಅವ್ರಲ್ಲಿ ಸ್ವಲ್ಪ ಜನ ಮಾತ್ರ ರಕ್ಷಣೆ ಪಡಿತಾರೆ.+ 28  ಯಾಕಂದ್ರೆ ಯೆಹೋವ* ಭೂಮಿಯಲ್ಲಿ ಇರುವವ್ರಿಗೆ ನ್ಯಾಯ ತೀರಿಸ್ತಾನೆ. ಇದನ್ನ ಬೇಗ ಮಾಡ್ತಾನೆ” ಅಂತ ಕೂಗಿ ಹೇಳಿದ.+ 29  “ಸೈನ್ಯಗಳ ದೇವರಾದ ಯೆಹೋವ* ನಮ್ಮ ಪೂರ್ವಜರಲ್ಲಿ ಸ್ವಲ್ಪ ಜನ್ರನ್ನ ಉಳಿಸಲಿಲ್ಲ ಅಂದಿದ್ರೆ ನಾವು ಸೊದೋಮಿನ ತರ ಆಗ್ತಿದ್ವಿ, ಗೊಮೋರಕ್ಕೆ ಬಂದ ಗತಿನೇ ನಮಗೂ ಬರ್ತಿತ್ತು” ಅಂತನೂ ಯೆಶಾಯ ಮೊದ್ಲೇ ಹೇಳಿದ್ದ.+ 30  ಹಾಗಾದ್ರೆ ನಾವು ಯಾವ ತೀರ್ಮಾನಕ್ಕೆ ಬರೋಣ? ಬೇರೆ ಜನಾಂಗಗಳ ಜನ್ರು ನೀತಿವಂತರಾಗೋಕೆ ಪ್ರಯತ್ನ ಮಾಡದಿದ್ರೂ ಅವ್ರಲ್ಲಿ ನಂಬಿಕೆ ಇರೋದ್ರಿಂದ+ ದೇವರು ಅವ್ರನ್ನ ನೀತಿವಂತರಾಗಿ ನೋಡ್ತಾನೆ.+ 31  ಆದ್ರೆ ಇಸ್ರಾಯೇಲ್ಯರು ನಿಯಮಗಳನ್ನ ಪಾಲಿಸಿ ನೀತಿವಂತರಾಗೋಕೆ ಪ್ರಯತ್ನ ಮಾಡಿದ್ರೂ ಆ ನಿಯಮಗಳನ್ನ ಪೂರ್ತಿಯಾಗಿ ಪಾಲಿಸೋಕೆ ಅವ್ರಿಂದ ಆಗಲಿಲ್ಲ. 32  ಯಾಕೆ? ಯಾಕಂದ್ರೆ ಅವರು ತಮ್ಮ ಕೆಲಸಗಳಿಂದ ನೀತಿವಂತರಾಗೋಕೆ ಪ್ರಯತ್ನಿಸಿದ್ರು, ನಂಬಿಕೆಯಿಂದ ಅಲ್ಲ. ಅವರು “ಎಡವೋ ಕಲ್ಲಿನ” ಮೇಲೆ ಎಡವಿದ್ರು.+ 33  “ನೋಡು, ಚೀಯೋನಲ್ಲಿ ನಾನು ಒಂದು ಎಡವಿಸೋ ಕಲ್ಲನ್ನ,+ ಮುಗ್ಗರಿಸೋ ಬಂಡೆಯನ್ನ ಇಡ್ತೀನಿ. ಅದ್ರ ಮೇಲೆ ನಂಬಿಕೆ ಇಡುವವನು ನಿರಾಶೆ ಪಡಲ್ಲ”+ ಅಂತ ಬರೆದಿದೆ.

ಪಾದಟಿಪ್ಪಣಿ

ಅಥವಾ “ಗೌರವದ.”
ಅಥವಾ “ಗೌರವ ಇಲ್ಲದ.”