ರೋಮನ್ನರಿಗೆ ಬರೆದ ಪತ್ರ 3:1-31

  • “ದೇವರು ಸತ್ಯವಂತನೇ” (1-8)

  • ಯೆಹೂದ್ಯರೂ ಗ್ರೀಕರೂ ಪಾಪಿಗಳೇ (9-20)

  • ನಂಬಿಕೆಯ ಮೂಲಕ ನೀತಿವಂತರು (21-31)

    • ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ (23)

3  ಹಾಗಾದ್ರೆ ಯೆಹೂದ್ಯರಾಗಿ ಇರೋದ್ರಿಂದ ಪ್ರಯೋಜನ ಇದ್ಯಾ? ಸುನ್ನತಿ ಮಾಡ್ಕೊಳ್ಳೋದ್ರಿಂದ ಲಾಭ ಇದ್ಯಾ? 2  ಯೆಹೂದ್ಯರಾಗಿ ಇರೋದ್ರಿಂದ ತುಂಬ ಪ್ರಯೋಜನ ಇದೆ. ಮೊದಲ್ನೇದಾಗಿ ದೇವರು ಪವಿತ್ರ ಬರಹಗಳನ್ನ* ಅವ್ರಿಗೆ ಕೊಟ್ಟನು.+ 3  ಆದ್ರೆ ಅವ್ರಲ್ಲಿ ಸ್ವಲ್ಪ ಜನ ನಂಬಿಕೆ ಇಡಲಿಲ್ಲ. ಅವರು ನಂಬಿಕೆ ತೋರಿಸಲಿಲ್ಲ ಅಂದ ತಕ್ಷಣ ದೇವರೇ ನಂಬಿಗಸ್ತನಲ್ಲ ಅಂತ ಅರ್ಥನಾ? 4  ಅಲ್ವೇ ಅಲ್ಲ! ಪ್ರತಿಯೊಬ್ಬನೂ ಸುಳ್ಳುಗಾರನಾದ್ರೂ+ ದೇವರು ಸತ್ಯವಂತನೇ.+ “ನೀನು ನೀತಿವಂತ ಅನ್ನೋದು ನಿನ್ನ ಮಾತಲ್ಲೇ ಗೊತ್ತಾಗುತ್ತೆ, ನಿನ್ನ ವಿರುದ್ಧ ಮಾಡಿದ ಮೊಕದ್ದಮೆಯಲ್ಲಿ ನೀನೇ ಗೆಲ್ತೀಯ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. 5  ಕೆಲವರು ‘ನಾವು ಕೆಟ್ಟ ಕೆಲಸಗಳನ್ನ ಮಾಡೋದ್ರಿಂದ ದೇವರು ಎಷ್ಟು ನೀತಿವಂತ ಅಂತ ತೋರಿಸ್ಕೊಡ್ತೀವಿ. ಅದು ನಿಜ ಆಗಿದ್ರೆ, ದೇವರು ನಮಗೆ ಶಿಕ್ಷೆ ಕೊಟ್ಟು ಅನ್ಯಾಯ ಮಾಡ್ತಿದ್ದಾನೆ ಅಂತ ಆಗುತ್ತಲ್ವಾ?’ ಅಂತಾರೆ. 6  ಇಲ್ಲ, ದೇವರು ಅನ್ಯಾಯಗಾರ ಅಲ್ಲ! ಅನ್ಯಾಯಗಾರ ಆಗಿದ್ರೆ ಆತನು ಈ ಲೋಕಕ್ಕೆ ಹೇಗೆ ನ್ಯಾಯತೀರಿಸ್ತಾನೆ?+ 7  ನಾನು ಸುಳ್ಳು ಹೇಳೋದ್ರಿಂದ ದೇವರು ಸತ್ಯವಂತ ಅಂತ ಗೊತ್ತಾಗೋದಾದ್ರೆ ಮತ್ತು ಆತನಿಗೆ ಗೌರವ ಸಿಗೋದಾದ್ರೆ ದೇವರು ಯಾಕೆ ನನ್ನನ್ನ ಪಾಪಿ ಅಂತ ಹೇಳಬೇಕು? 8  “ನಾವು ಕೆಟ್ಟದು ಮಾಡೋಣ, ಅದ್ರಿಂದ ಒಳ್ಳೇದಾಗುತ್ತೆ” ಅಂತ ನಾವೂ ಹೇಳಬಹುದಲ್ವಾ? ನಾವು ಹಾಗೆ ಹೇಳ್ತೀವಿ ಅಂತ ಕೆಲವರು ನಮ್ಮ ಬಗ್ಗೆ ಸುಳ್ಳು ಹೇಳ್ತಾರೆ. ಅಂಥವ್ರಿಗೆ ಶಿಕ್ಷೆ ಆಗುತ್ತೆ, ಅದು ನ್ಯಾಯ.+ 9  ಹಾಗಾದ್ರೆ ಬೇರೆಯವರಿಗಿಂತ ನಾವು ಶ್ರೇಷ್ಠನಾ? ಅಲ್ವೇ ಅಲ್ಲ! ಯೆಹೂದ್ಯರು, ಗ್ರೀಕರು ಎಲ್ರೂ ಪಾಪದ ಕೆಳಗಿದ್ದಾರೆ+ ಅಂತ ನಾವು ಈಗಾಗ್ಲೇ ವಿವರಿಸಿದ್ದೀವಿ. 10  “ನೀತಿವಂತರು ಯಾರೂ ಇಲ್ಲ, ಒಬ್ಬನೂ ಇಲ್ಲ.+ 11  ಯಾರಿಗೂ ಸ್ವಲ್ಪನೂ ಬುದ್ಧಿ* ಇಲ್ಲ. ದೇವರನ್ನ ಹುಡುಕುವವನು ಒಬ್ಬನೂ ಇಲ್ಲ. 12  ಮನುಷ್ಯರೆಲ್ಲ ದಾರಿತಪ್ಪಿದ್ದಾರೆ, ಎಲ್ರೂ ಕೆಲಸಕ್ಕೆ ಬಾರದ ಜನ್ರು, ದಯೆ ತೋರಿಸುವವರು ಯಾರೂ ಇಲ್ಲ, ಒಬ್ಬನೂ ಇಲ್ಲ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. 13  “ಅವ್ರ ಬಾಯಿ* ತೆರೆದಿರೋ ಸಮಾಧಿ ತರ, ಅವರು ನಾಲಿಗೆ ಉಪಯೋಗಿಸೋದೇ ಮೋಸ ಮಾಡೋಕೆ.”+ “ಅವ್ರ ತುಟಿ ಹಿಂದೆ ಹಾವಿನ ವಿಷ ಇದೆ.”+ 14  “ಅವರು ಬಾಯಿಬಿಟ್ರೆ ಶಾಪ ಹಾಕ್ತಾರೆ, ದ್ವೇಷ ಕಕ್ಕುತ್ತಾರೆ.”+ 15  “ಕೊಲೆ ಮಾಡೋಕೆ ತುದಿಗಾಲಲ್ಲಿ ನಿಂತಿರ್ತಾರೆ.”*+ 16  “ಜನ್ರಿಗೆ ಕಷ್ಟ ಕೊಡೋದೇ ಅವರ ಕೆಲಸ, 17  ಶಾಂತಿಯಿಂದ ಇರೋಕೆ ಅವ್ರಿಗೆ ಆಗೋದೇ ಇಲ್ಲ.”+ 18  “ದೇವರ ಮೇಲೆ ಒಂಚೂರೂ ಭಯ ಇಲ್ಲ.”+ 19  ನಿಯಮ ಪುಸ್ತಕದಲ್ಲಿ ಹೇಳಿರೋದೆಲ್ಲ ಯೆಹೂದ್ಯರಿಗೆ* ಅಂತ ನಮಗೆ ಗೊತ್ತು. ನಾವು ತಪ್ಪೇ ಮಾಡಿಲ್ಲ ಅಂತ ಹೇಳುವವ್ರ ಬಾಯಿ ಮುಚ್ಚಿಸೋಕೆ ಮತ್ತು ಇಡೀ ಲೋಕ ದೇವರಿಂದ ಶಿಕ್ಷೆ ಪಡಿಯೋಕೆ ಲಾಯಕ್ಕಾಗಿದೆ ಅಂತ ತೋರಿಸೋಕೆ ಅದನ್ನ ಕೊಡಲಾಯ್ತು.+ 20  ಹಾಗಾಗಿ ಒಬ್ಬ ನಿಯಮ ಪುಸ್ತಕದಲ್ಲಿ ಹೇಳಿರೋದನ್ನ ಮಾಡಿದ್ರೆ ದೇವರು ಅವನನ್ನ ನೀತಿವಂತ ಅಂತ ಅನ್ನಲ್ಲ.+ ನಿಜ ಹೇಳಬೇಕಂದ್ರೆ, ಪಾಪ ಅಂದ್ರೆ ಏನಂತ ನಮಗೆ ಪೂರ್ತಿ ಗೊತ್ತಾಗಿದ್ದೇ ನಿಯಮದಿಂದ.+ 21  ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸದಿದ್ರೂ ದೇವರ ದೃಷ್ಟಿಯಲ್ಲಿ ನೀತಿವಂತರಾಗಿ ಇರೋಕೆ ಸಾಧ್ಯ ಅನ್ನೋದು ಈಗ ಸ್ಪಷ್ಟ ಆಗಿದೆ.+ ಇದು ನಿಯಮ ಪುಸ್ತಕದಲ್ಲೂ ಪ್ರವಾದಿಗಳ ಪುಸ್ತಕದಲ್ಲೂ ಇತ್ತು.+ 22  ಹೌದು, ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡೋದ್ರಿಂದ ದೇವರ ದೃಷ್ಟಿಯಲ್ಲಿ ನೀತಿವಂತರಾಗಿ ಇರೋಕೆ ಆಗುತ್ತೆ, ಆತನಲ್ಲಿ ನಂಬಿಕೆ ಇಡೋ ಎಲ್ರೂ ನೀತಿವಂತರಾಗಿ ಇರೋಕೆ ಸಾಧ್ಯ. ದೇವರ ದೃಷ್ಟಿಯಲ್ಲಿ ಎಲ್ರೂ ಒಂದೇ.+ 23  ಎಲ್ರೂ ಪಾಪ ಮಾಡಿದ್ದಾರೆ. ಹಾಗಾಗಿ ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ.+ 24  ಆದ್ರೆ ಅವ್ರನ್ನ ಪಾಪದಿಂದ ಬಿಡಿಸೋಕೆ ಕ್ರಿಸ್ತ ಯೇಸು ಬಿಡುಗಡೆಯ ಬೆಲೆಯನ್ನ ಕೊಟ್ಟಿದ್ರಿಂದ+ ದೇವರು ಅವ್ರನ್ನ ನೀತಿವಂತರಾಗಿ ನೋಡ್ತಾನೆ. ಇದು ದೇವರ ಅಪಾರ ಕೃಪೆ+ ಮತ್ತು ಆತನ ಉಚಿತ ಉಡುಗೊರೆ.+ 25  ಕ್ರಿಸ್ತನ ರಕ್ತದಲ್ಲಿ+ ನಂಬಿಕೆ ಇಟ್ಟು ಮನುಷ್ಯರು ತನ್ನ ಜೊತೆ ಸಮಾಧಾನ ಮಾಡ್ಕೊಬೇಕು ಅಂತ ದೇವರು ಕ್ರಿಸ್ತನನ್ನ ಪ್ರಾಯಶ್ಚಿತ್ತ ಬಲಿಯಾಗಿ ಕೊಟ್ಟನು.+ ದೇವರು ತನ್ನ ನೀತಿಯನ್ನ ತೋರಿಸೋಕೆ ಈ ಏರ್ಪಾಡು ಮಾಡಿದನು. ಯಾಕಂದ್ರೆ ಹಿಂದಿನ ಕಾಲದಲ್ಲಿ ಆತನು ತಾಳ್ಮೆ* ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು. 26  ಅಷ್ಟೇ ಅಲ್ಲ, ಈಗ್ಲೂ ಯೇಸು ಮೇಲೆ ನಂಬಿಕೆ ಇಟ್ಟಿರೋ ವ್ಯಕ್ತಿಯನ್ನ ನೀತಿವಂತನಾಗಿ ನೋಡುವಾಗ+ ಆತನೂ ನೀತಿವಂತ+ ಅಂತ ಗೊತ್ತಾಗುತ್ತೆ. 27  ಕ್ರಿಯೆಗಳು ಮುಖ್ಯ ಅಂತ ತೋರಿಸೋ ನಿಯಮ ಪುಸ್ತಕ ಒಬ್ಬನನ್ನ ಕೊಚ್ಕೊಳ್ಳೋ ತರ ಮಾಡಬಹುದು. ಹಾಗಾದ್ರೆ ನಾವು ಕೊಚ್ಕೊಬೇಕಾ? ಇಲ್ಲ. ಯಾಕಂದ್ರೆ ಕೊಚ್ಕೊಳ್ಳೋಕೆ ಯಾರಿಗೂ ಕಾರಣ ಇಲ್ಲ+ ಅಂತ ನಂಬಿಕೆಯ ನಿಯಮದಿಂದ ಸ್ಪಷ್ಟ ಆಗಿದೆ. 28  ದೇವರು ಒಬ್ಬನನ್ನ ನೀತಿವಂತನಾಗಿ ನೋಡೋದು ನಿಯಮ ಪುಸ್ತಕ ಹೇಳೋದನ್ನ ಅವನು ಮಾಡೋದ್ರಿಂದ ಅಲ್ಲ, ಅವನಲ್ಲಿರೋ ನಂಬಿಕೆಯಿಂದ.+ 29  ಆತನು ಯೆಹೂದ್ಯರಿಗೆ ಮಾತ್ರ ದೇವರಾ?+ ಬೇರೆಯವ್ರಿಗೂ ದೇವರೇ ತಾನೇ?+ ಹೌದು, ಆತನು ಬೇರೆಯವ್ರಿಗೂ ದೇವರೇ.+ 30  ದೇವರು ಒಬ್ಬನೇ+ ಆಗಿರೋದ್ರಿಂದ, ಆತನು ಸುನ್ನತಿ ಆದವ್ರನ್ನೂ ಅವ್ರಲ್ಲಿರೋ ನಂಬಿಕೆಯಿಂದ ನೀತಿವಂತರಾಗಿ ನೋಡ್ತಾನೆ,+ ಸುನ್ನತಿ ಆಗಿಲ್ಲದವ್ರನ್ನೂ ಅವ್ರ ನಂಬಿಕೆಯಿಂದಾನೇ ನೀತಿವಂತರಾಗಿ ನೋಡ್ತಾನೆ.+ 31  ಹಾಗಾದ್ರೆ ನಮ್ಮ ನಂಬಿಕೆಯಿಂದ ನಾವು ನಿಯಮ ಪುಸ್ತಕ ಪ್ರಯೋಜನ ಇಲ್ಲ ಅಂತ ಹೇಳ್ತಿದ್ದೀವಾ? ಇಲ್ವೇ ಇಲ್ಲ! ಬದ್ಲಿಗೆ ನಿಯಮ ಪುಸ್ತಕ ಸರಿ ಅಂತ ತೋರಿಸ್ತಾ ಇದ್ದೀವಿ.+

ಪಾದಟಿಪ್ಪಣಿ

ಅಕ್ಷ. “ಮಾತುಗಳನ್ನ.”
ಅಕ್ಷ. “ಒಳನೋಟ.”
ಅಕ್ಷ. “ಗಂಟಲು.”
ಅಕ್ಷ. “ಅವ್ರ ಕಾಲುಗಳು ರಕ್ತ ಸುರಿಸೋಕೆ ಓಡುತ್ತೆ.”
ಅಕ್ಷ. “ನಿಯಮದ ಕೆಳಗೆ ಇರುವವರಿಗೆ.”
ಅಥವಾ “ಸೈರಣೆ.”