ಜ್ಞಾನೋಕ್ತಿ 25:1-28

  • ಗುಟ್ಟಾಗಿಡೋದು (9)

  • ಸರಿಯಾಗಿ ಆರಿಸ್ಕೊಂಡ ಮಾತುಗಳು (11)

  • ಬೇರೆಯವ್ರ ಏಕಾಂತತೆಯನ್ನ ಗೌರವಿಸಬೇಕು (17)

  • ಶತ್ರುವಿನ ತಲೆ ಮೇಲೆ ಕೆಂಡಗಳ ರಾಶಿ ಇಡೋದು (21, 22)

  • ದೂರದೇಶದಿಂದ ಬಂದ ಒಳ್ಳೇ ವರದಿ ತಂಪಾದ ನೀರು ತರ (25)

25  ಇವು ಸಹ ಸೊಲೊಮೋನನ ನಾಣ್ಣುಡಿಗಳು.+ ಇದನ್ನೆಲ್ಲ ಯೆಹೂದದ ರಾಜ ಹಿಜ್ಕೀಯನ+ ಆಸ್ಥಾನದಲ್ಲಿದ್ದ ಗಂಡಸರು ನಕಲು ಮಾಡಿದ್ರು.*   ವಿಷ್ಯವನ್ನ ಗುಟ್ಟಾಗಿ ಇಡೋದ್ರಿಂದ ದೇವರಿಗೆ ಗೌರವ,+ವಿಷ್ಯವನ್ನ ಪರಿಶೋಧಿಸೋದು ರಾಜರಿಗೆ ಗೌರವ.   ಆಕಾಶದ ಎತ್ತರವನ್ನ, ಭೂಮಿಯ ಆಳವನ್ನ,ರಾಜರ ಹೃದಯವನ್ನ ತಿಳ್ಕೊಳ್ಳಕ್ಕಾಗಲ್ಲ.   ಬೆಳ್ಳಿಯಿಂದ ಕೊಳೆ* ತೆಗೀರಿ,ಆಗ ಅದು ಪೂರ್ತಿ ಶುದ್ಧ ಆಗುತ್ತೆ.+   ರಾಜನ ಸನ್ನಿಧಿಯಿಂದ ಕೆಟ್ಟವ್ರನ್ನ ತೆಗೆದುಹಾಕಿದ್ರೆ,ಅವನ ಸಿಂಹಾಸನ ನೀತಿವಂತರಿಂದ ಇನ್ನೂ ಗಟ್ಟಿ ಆಗುತ್ತೆ.+   ರಾಜನ ಮುಂದೆ ನಿನ್ನನ್ನ ನೀನೇ ಹೆಚ್ಚಿಸ್ಕೊಳ್ಳಬೇಡ,+ದೊಡ್ಡ ದೊಡ್ಡ ಜನ್ರ ಮಧ್ಯ ನಿಲ್ಲಬೇಡ.+   ಪ್ರಧಾನ ವ್ಯಕ್ತಿಗಳ ಮುಂದೆ ರಾಜ ನಿನಗೆ ಅವಮಾನ ಮಾಡೋದಕ್ಕಿಂತ,“ಹೋಗಿ ಅಲ್ಲಿ ಕೂತ್ಕೊ” ಅಂತ ಹೇಳೋದೇ ಒಳ್ಳೇದು.+   ಪಕ್ಕದ ಮನೆಯವನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕೋಕೆ ಆತುರಪಡಬೇಡ,ಯಾಕಂದ್ರೆ ನೀನೇ ಅಪರಾಧಿ ಅಂತ ಅವನು ಸಾಬೀತು ಮಾಡಿದ್ರೆ ನೀನೇನು ಮಾಡ್ತೀಯ?+   ಅವನ ಜೊತೆ ಮಾತಾಡಿ ವಿಷ್ಯ ಸರಿಮಾಡ್ಕೊ,+ಆದ್ರೆ ಅವನ* ಗುಟ್ಟುಗಳನ್ನ ಬೇರೆಯವ್ರಿಗೆ ಹೇಳಬೇಡ.+ 10  ಯಾಕಂದ್ರೆ ಆ ವಿಷ್ಯವನ್ನ ಕೇಳಿಸ್ಕೊಳ್ಳುವವನು ನಿನಗೆ ಅವಮಾನ ಮಾಡ್ತಾನೆ,ನೀನು ಹಬ್ಬಿಸಿದ ಕೆಟ್ಟ ವಿಷ್ಯವನ್ನ* ವಾಪಸ್‌ ತಗೋಳ್ಳೋಕೆ ಆಗಲ್ಲ. 11  ಸರಿಯಾದ ಸಮಯದಲ್ಲಿ ಹೇಳಿದ ಮಾತುಬೆಳ್ಳಿ ಪಾತ್ರೆಯಲ್ಲಿ ಇರೋ ಬಂಗಾರದ ಸೇಬುಗಳ ತರ ಚಂದ.+ 12  ವಿವೇಕದಿಂದ ತಿದ್ದುವವನ ಮಾತನ್ನ ಕೇಳೋ ಕಿವಿಗೆಅದು ಬಂಗಾರದ ಕಿವಿಯೋಲೆ ತರ, ಅಪ್ಪಟ ಚಿನ್ನದ ಒಡವೆ ತರ.+ 13  ನಂಬಿಗಸ್ತ ಸಂದೇಶವಾಹಕ ತನ್ನನ್ನ ಕಳಿಸಿದ ವ್ಯಕ್ತಿಗೆಕೊಯ್ಲಿನ ದಿನ ಬೀಳೋ ತಂಪಾದ ಹಿಮದ ತರತನ್ನ ಯಜಮಾನನಿಗೆ ಚೈತನ್ಯ ಕೊಡ್ತಾನೆ.+ 14  ಯಾವತ್ತೂ ಸಿಗದ ಬಹುಮಾನದ ಬಗ್ಗೆ ಕೊಚ್ಕೊಳ್ಳುವವನು,ಮಳೆ ಕೊಡದ ಮೋಡದ ಹಾಗೆ, ಗಾಳಿ ಹಾಗೆ ಇರ್ತಾನೆ.+ 15  ತಾಳ್ಮೆಯಿಂದ ಅಧಿಕಾರಿಯನ್ನ ಗೆಲ್ಲಬಹುದು,ಮೃದುವಾದ ಮಾತಿಂದ ಮೂಳೆನೂ ಮುರಿಬಹುದು.+ 16  ಜೇನು ಸಿಕ್ಕಿದಾಗ ಅಗತ್ಯ ಇದ್ದಷ್ಟೆ ತಿನ್ನು,ಜಾಸ್ತಿ ತಿಂದ್ರೆ ಆಮೇಲೆ ಅದನ್ನ ಕಕ್ಕಬೇಕಾಗುತ್ತೆ.+ 17  ಪಕ್ಕದ ಮನೆಗೆ ಪದೇಪದೇ ಹೋಗಬೇಡ,ಹೋದ್ರೆ ಅವನು ಬೇಸತ್ತು ನಿನ್ನನ್ನ ದ್ವೇಷಿಸ್ತಾನೆ. 18  ಬೇರೆಯವ್ರ ಬಗ್ಗೆ ಸುಳ್ಳುಸಾಕ್ಷಿ ಹೇಳುವವನು,ಯುದ್ಧದಲ್ಲಿ ಬಳಸೋ ದೊಣ್ಣೆ, ಕತ್ತಿ, ಚೂಪಾದ ಬಾಣಗಳ ತರ.+ 19  ನಂಬೋಕೆ ಆಗದ* ವ್ಯಕ್ತಿ ಮೇಲೆ ಕಷ್ಟಕಾಲದಲ್ಲಿ ನಂಬಿಕೆ ಇಡೋದು,ಅಲ್ಲಾಡೋ ಹಲ್ಲಿಂದ ಅಗಿಯೋ ತರ, ನಡುಗೋ ಕಾಲಿಂದ ನಡಿಯೋ ತರ. 20  ನಿರಾಶೆಗೊಂಡಿರೋ ಹೃದಯದ ಮುಂದೆ ಹಾಡು ಹಾಡೋನು+ಚಳಿಗಾಲದ ದಿನದಲ್ಲಿ ಬಟ್ಟೆ ಬಿಚ್ಚೋ ತರ,ಸೋಡದ* ಮೇಲೆ ಹುಳಿ ಸುರಿಯೋ ತರ. 21  ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+ 22  ಹಾಗೆ ಮಾಡಿದ್ರೆ ಉರಿತಿರೋ ಕೆಂಡಗಳನ್ನ ಅವನ ತಲೆ ಮೇಲೆ ರಾಶಿರಾಶಿಯಾಗಿ ಇಟ್ಟಹಾಗೆ ಇರುತ್ತೆ,*+ಯೆಹೋವನೇ ನಿನಗೆ ಪ್ರತಿಫಲ ಕೊಡ್ತಾನೆ. 23  ಉತ್ತರದ ಗಾಳಿ ಸುರಿಮಳೆಯನ್ನ ತರುತ್ತೆ,ಗಾಳಿಸುದ್ದಿ ಹಬ್ಬಿಸೋ ನಾಲಿಗೆ ಕೋಪ ಬರಿಸುತ್ತೆ.+ 24  ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+ 25  ದೂರದೇಶದಿಂದ ಬಂದ ಒಳ್ಳೇ ವರದಿ,ದಣಿದಿರೋ ಪ್ರಾಣಕ್ಕೆ* ತಂಪಾದ ನೀರಿನ ತರ.+ 26  ಕೆಟ್ಟವನ ಜೊತೆ ರಾಜಿಮಾಡ್ಕೊಳ್ಳೋ ನೀತಿವಂತ,ಕೆಸರಿನ ಬುಗ್ಗೆ ತರ, ಹಾಳು ಬಾವಿ ತರ. 27  ಅತಿಯಾಗಿ ಜೇನು ತಿನ್ನೋದು ಒಳ್ಳೇದಲ್ಲ,+ಅದೇ ತರ ತನಗೆ ಗೌರವ ಬರಬೇಕಂತ ಬಯಸೋದೂ ಒಳ್ಳೇದಲ್ಲ.+ 28  ಕೋಪಕ್ಕೆ ಕಡಿವಾಣ ಹಾಕದವನುಗೋಡೆ ಬಿದ್ದ ಪಟ್ಟಣ ತರ.+

ಪಾದಟಿಪ್ಪಣಿ

ಅಥವಾ “ಸಂಗ್ರಹಿಸಿ ಅದ್ರ ಪ್ರತಿಯನ್ನ ತಯಾರಿಸಿದ್ರು.”
ಅಥವಾ “ಕಿಟ್ಟ.”
ಅಥವಾ “ಬೇರೆಯವ್ರ”
ಅಥವಾ “ಕೆಟ್ಟ ಉದ್ದೇಶದಿಂದ ಕೂಡಿದ ಗಾಳಿಸುದ್ದಿಯನ್ನ.”
ಬಹುಶಃ, “ವಂಚಕ.”
ಅಥವಾ “ಕ್ಷಾರದ.”
ಅದು, ಅವನನ್ನ ಮೃದುಮಾಡಿ ಅವನ ಕೋಪ ಕರಗಿಸುತ್ತೆ.
ಅಥವಾ “ಕಿರಿಕಿರಿ ಮಾಡೋ.”