ಕೀರ್ತನೆ 63:1-11

  • ದೇವರಿಗಾಗಿ ಹಂಬಲ

    • “ನಿನ್ನ ಶಾಶ್ವತ ಪ್ರೀತಿಯು ಜೀವಕ್ಕಿಂತ ಅಮೂಲ್ಯ” (3)

    • ‘ಅತ್ಯುತ್ತಮವಾಗಿ ಇರೋದನ್ನ ಪಡ್ಕೊಂಡು ತೃಪ್ತಿಯಾಗಿದ್ದೀನಿ’ (5)

    • ರಾತ್ರಿಯಲ್ಲಿ ದೇವರ ಬಗ್ಗೆನೇ ಧ್ಯಾನ (6)

    • ‘ನಾನು ದೇವರಿಗೆ ಅಂಟ್ಕೊಂಡು ಇರ್ತೀನಿ’ (8)

ದಾವೀದನ ಮಧುರ ಗೀತೆ. ದಾವೀದ ಯೆಹೂದದ ಕಾಡಲ್ಲಿದ್ದಾಗ ಇದನ್ನ ರಚಿಸಿದ.+ 63  ದೇವರೇ, ನೀನು ನನ್ನ ದೇವರು. ನಾನು ನಿನಗಾಗಿ ಹುಡುಕ್ತಾ ಇದ್ದೀನಿ.+ ನನ್ನ ಪ್ರಾಣ ನಿನಗಾಗಿ ಬಾಯಾರಿದೆ.+ ಒಣಗಿ ಹೋಗಿರೋ, ಬತ್ತಿ ಹೋಗಿರೋ ಈ ನೀರಿಲ್ಲದ ಜಾಗದಲ್ಲಿ ನಾನು* ನಿನಗಾಗಿ ಎಷ್ಟು ಹಾತೊರಿತಾ ಇದ್ದೀನಿ ಅಂದ್ರೆ ಇನ್ನೇನು ಪ್ರಜ್ಞೆ ತಪ್ಪಿ ಬಿದ್ದುಬಿಡ್ತೀನಿ.+  2  ಹಾಗಾಗಿ ನಿನ್ನನ್ನ ನೋಡೋಕೆ ನಾನು ನಿನ್ನ ಪವಿತ್ರ ಸ್ಥಳದಲ್ಲಿ ಹುಡುಕಿದೆ,ನಿನ್ನ ಬಲ, ನಿನ್ನ ಮಹಿಮೆಯನ್ನ ನೋಡಿದೆ.+  3  ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ,+ನನ್ನ ಸ್ವಂತ ತುಟಿ ನಿನ್ನನ್ನ ಹೊಗಳುತ್ತೆ.+  4  ಹಾಗಾಗಿ ನಾನು ಸಾಯೋ ತನಕ ನಿನ್ನನ್ನ ಕೊಂಡಾಡ್ತೀನಿ,ನನ್ನ ಕೈಗಳನ್ನ ಎತ್ತಿ ನಿನ್ನ ಹೆಸ್ರನ್ನ ಕೂಗ್ತೀನಿ.  5  ಒಳ್ಳೇ ಭಾಗನ ಮತ್ತು ದೊಡ್ಡ ಭಾಗನ ಪಡ್ಕೊಂಡು ನಾನು ತೃಪ್ತಿಯಾಗಿ ಇದ್ದೀನಿ,ಹಾಗಾಗಿ ನನ್ನ ಬಾಯಿ ಸಂತೋಷದಿಂದ ನಿನ್ನನ್ನ ಹೊಗಳುತ್ತೆ.+  6  ಹಾಸಿಗೆ ಮೇಲಿರುವಾಗ ನಾನು ನಿನ್ನನ್ನ ನೆನಪಿಸ್ಕೊತೀನಿ,ಮಧ್ಯರಾತ್ರಿಯಲ್ಲಿ ನಾನು ನಿನ್ನ ಬಗ್ಗೆ ಧ್ಯಾನಿಸ್ತೀನಿ.+  7  ಯಾಕಂದ್ರೆ ನೀನು ನನ್ನ ಸಹಾಯಕ,+ನಿನ್ನ ರೆಕ್ಕೆಗಳ ಕೆಳಗೆ ನಾನು ಸಂತೋಷದಿಂದ ಜೈಕಾರ ಹಾಕ್ತೀನಿ.+  8  ನಾನು ನಿನಗೆ ಅಂಟ್ಕೊಂಡು ಇರ್ತಿನಿ,ನಿನ್ನ ಬಲಗೈ ನನ್ನನ್ನ ಗಟ್ಟಿಯಾಗಿ ಹಿಡ್ಕೊಂಡಿರುತ್ತೆ.+  9  ಆದ್ರೆ ಯಾರು ನನ್ನ ಪ್ರಾಣ ತೆಗೀಬೇಕು ಅಂತಿದ್ದಾರೋ,ಅವರು ಭೂಮಿಯ ಆಳಕ್ಕೆ ಇಳಿದು ಹೋಗ್ತಾರೆ. 10  ಅವರು ಕತ್ತಿಯಿಂದ ನಾಶ ಆಗ್ತಾರೆ,ಅವರು ಗುಳ್ಳೆನರಿಗಳಿಗೆ* ಆಹಾರ ಆಗ್ತಾರೆ. 11  ಆದ್ರೆ ರಾಜ ದೇವರಲ್ಲಿ ಖುಷಿಪಡ್ತಾನೆ. ಸುಳ್ಳು ಹೇಳೋರ ಬಾಯನ್ನ ಮುಚ್ಚೊದ್ರಿಂದ,ದೇವರ ಮೇಲೆ ಆಣೆ ಇಡೋರೆಲ್ಲ ತುಂಬ ಖುಷಿಪಡ್ತಾರೆ.*

ಪಾದಟಿಪ್ಪಣಿ

ಅಕ್ಷ. “ನನ್ನ ಮಾಂಸ.”
ಅಥವಾ “ನರಿಗಳಿಗೆ.”
ಅಥವಾ “ಕೊಚ್ಚಿಕೊಳ್ತಾರೆ.”