ಕೀರ್ತನೆ 49:1-20

  • ಸಂಪತ್ತಿನಲ್ಲಿ ಭರವಸೆ ಇಡೋದು ಮೂರ್ಖತನ

    • ಒಬ್ಬ ಮನುಷ್ಯ ಇನ್ನೊಬ್ಬನನ್ನ ಬಿಡಿಸೋಕೆ ಆಗಲ್ಲ (7, 8)

    • ದೇವರು ಸಮಾಧಿಯ ಕೈಯಿಂದ ಬಿಡಿಸ್ತಾನೆ (15)

    • ಐಶ್ವರ್ಯ ಸಾವಿಂದ ತಪ್ಪಿಸಲ್ಲ (16, 17)

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಧುರ ಗೀತೆ. 49  ದೇಶಗಳ ಜನ್ರೇ, ನೀವೆಲ್ಲ ಇದನ್ನ ಕೇಳಿಸ್ಕೊಳ್ಳಿ. ಭೂಮಿಯ ನಿವಾಸಿಗಳೇ, ನೀವೆಲ್ಲ ಇದಕ್ಕೆ ಗಮನಕೊಡಿ.  2  ಚಿಕ್ಕವರಾಗಿರಲಿ, ದೊಡ್ಡವರಾಗಿರಲಿಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ರೂ ಗಮನಕೊಟ್ಟು ಕೇಳಿ.  3  ನನ್ನ ಬಾಯಿ ವಿವೇಕದ ಮಾತುಗಳನ್ನಾಡುತ್ತೆ,ನನ್ನ ಹೃದಯ ಆಳವಾದ ವಿಚಾರಗಳ* ಬಗ್ಗೆ ಧ್ಯಾನಿಸುತ್ತೆ.+  4  ನಾನು ನಾಣ್ಣುಡಿಗೆ ಗಮನಕೊಡ್ತೀನಿ,ತಂತಿವಾದ್ಯವನ್ನ ನುಡಿಸುವಾಗ ನನ್ನ ಒಗಟನ್ನ ವಿವರಿಸ್ತೀನಿ.  5  ಸಂಕಷ್ಟದ ಸಮ್ಯದಲ್ಲಿ ನಾನು ಯಾಕೆ ಹೆದರಬೇಕು?+ ಜನ್ರು ಕೆಟ್ಟ ಕೆಲಸಗಳಿಂದ* ನನ್ನನ್ನ ಮುಗಿಸಿಬಿಡಬೇಕು ಅಂತ ನನ್ನನ್ನ ಸುತ್ಕೊಂಡಾಗ ನಾನು ಯಾಕೆ ಭಯಪಡಬೇಕು?  6  ಯಾರು ತಮ್ಮ ಆಸ್ತಿಪಾಸ್ತಿಯಲ್ಲಿ ಭರವಸೆಯಿಡ್ತಾರೋ,+ಯಾರು ತಮ್ಮ ಶ್ರೀಮಂತಿಕೆ ಬಗ್ಗೆ ಕೊಚ್ಚಿಕೊಳ್ತಾರೋ,+  7  ಅವ್ರಲ್ಲಿ ಯಾರಿಗೂ ತಮ್ಮ ಸಹೋದರನನ್ನ ಬಿಡಿಸೋಕೆ ಆಗೋದೇ ಇಲ್ಲ ಅಥವಾದೇವ್ರಿಗೆ ಬಿಡುಗಡೆ ಬೆಲೆ ಕೊಟ್ಟು ಅವನನ್ನ ಬಿಡಿಸೋಕೆ ಆಗಲ್ಲ,+  8  (ತಮ್ಮ ಜೀವಕ್ಕಾಗಿ ಅವರು ಕೊಡಬೇಕಾಗಿರೋ ಬಿಡುಗಡೆ ಬೆಲೆ ತುಂಬ ಅಮೂಲ್ಯ. ಹಾಗಾಗಿ ಅವರು ಅದನ್ನ ಯಾವತ್ತೂ ಕೊಡಕ್ಕಾಗಲ್ಲ)  9  ಅವ್ರ ಸಹೋದರ ಸಮಾಧಿಯನ್ನ* ಸೇರದೆ ಇರೋ ಹಾಗೆ ನೋಡ್ಕೊಳ್ಳೋಕೆ, ಅವನು ಶಾಶ್ವತವಾಗಿ ಜೀವಿಸೋ ಹಾಗೆ ಮಾಡೋಕೆ ಅವ್ರ ಕೈಯಲ್ಲಿ ಆಗಲ್ಲ.+ 10  ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+ ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+ 11  ಅವ್ರ ಮನೆಗಳು ಶಾಶ್ವತವಾಗಿ ಉಳಿಬೇಕು ಅನ್ನೋದು ಅವ್ರ ಮನದಾಳದ ಆಸೆ,ಅವ್ರ ಡೇರೆಗಳು ತಲತಲಾಂತರಕ್ಕೂ ಇರಬೇಕು ಅನ್ನೋದು ಅವ್ರ ಹೃದಯದಾಳದ ಬಯಕೆ. ಅವರು ತಮ್ಮ ಆಸ್ತಿಗೆ ತಮ್ಮ ಹೆಸ್ರನ್ನೇ ಇಟ್ಟಿದ್ದಾರೆ. 12  ಆದ್ರೆ ಮನುಷ್ಯನಿಗೆ ಎಷ್ಟೇ ಗೌರವ ಇದ್ರೂ, ಅವನು ಶಾಶ್ವತವಾಗಿ ಬದುಕಲ್ಲ.+ ನಾಶವಾಗಿ ಹೋಗೋ ಪ್ರಾಣಿಗಳಿಗಿಂತ ಅವನೇನೂ ದೊಡ್ಡವನಲ್ಲ.+ 13  ಮೂರ್ಖರಿಗೂ ಅವ್ರ ಹಿಂದೆ ಹೋಗೋರಿಗೂಅವ್ರ ಪೊಳ್ಳು ಮಾತುಗಳಲ್ಲಿ ಖುಷಿಪಡೋರಿಗೂ ಇದೇ ಗತಿ ಆಗುತ್ತೆ.+ (ಸೆಲಾ) 14  ಕುರಿಗಳನ್ನ ಕಡಿಯೋಕೆ ತಗೊಂಡು ಹೋಗೋ ತರ,ಅವ್ರನ್ನ ಸಮಾಧಿಗೆ* ಒಪ್ಪಿಸಲಾಗುತ್ತೆ. ಸಾವು ಅವ್ರನ್ನ ಕಾಯುತ್ತೆ. ಬೆಳಗ್ಗೆ ನೀತಿವಂತರು ಅವ್ರ ಮೇಲೆ ಆಳ್ವಿಕೆ ಮಾಡ್ತಾರೆ.+ ಅವರು ಒಂದು ಸುಳಿವೂ ಇಲ್ಲದ ಹಾಗೇ ಹೋಗ್ತಾರೆ,+ಅರಮನೆಯ ಬದಲು ಸಮಾಧಿನೇ*+ ಅವ್ರ ಮನೆ ಆಗಿರುತ್ತೆ.+ 15  ಆದ್ರೆ ದೇವರು ನನ್ನನ್ನ ಸಮಾಧಿಯ* ಕೈಯಿಂದ* ಬಿಡಿಸ್ತಾನೆ,+ಯಾಕಂದ್ರೆ ಆತನು ಅಲ್ಲಿಂದ ನನ್ನನ್ನ ಮೇಲಕ್ಕೆ ಎಳ್ಕೊಳ್ತಾನೆ. (ಸೆಲಾ) 16  ಒಬ್ಬ ಮನುಷ್ಯ ಶ್ರೀಮಂತನಾದ್ರೆ ಹೆದರಬೇಡ,ಅವನ ಮನೆಯ ವೈಭವ ಹೆಚ್ಚಾದ್ರೆ ಭಯಪಡಬೇಡ, 17  ಯಾಕಂದ್ರೆ ಅವನು ಸತ್ತಾಗ ಅವನ ಜೊತೆ ಏನೂ ತಗೊಂಡು ಹೋಗಕ್ಕಾಗಲ್ಲ,+ಅವನ ವೈಭವ ಅವನ ಜೊತೆ ಹೋಗಲ್ಲ.+ 18  ಯಾಕಂದ್ರೆ, ಅವನು ಸಾಯೋ ತನಕ ಅವನನ್ನ ಅವನೇ ಹೊಗಳ್ಕೊಂಡ.+ (ಯಾರಾದ್ರೂ ಏಳಿಗೆ ಆದಾಗ ಜನ ಹೊಗಳ್ತಾರೆ.)+ 19  ಆದ್ರೆ ಕೊನೆಗೆ, ಅವನೂ ಪೂರ್ವಜರ ತರ ಸತ್ತು ಹೋಗ್ತಾನೆ. ಅವನು ಮತ್ತು ಅವನ ಪೂರ್ವಜರು ಇನ್ಯಾವತ್ತೂ ಬೆಳಕನ್ನ ನೋಡೋದಿಲ್ಲ. 20  ಆದ್ರೆ ಈ ವಿಷ್ಯವನ್ನ ಅರ್ಥಮಾಡ್ಕೊಳ್ಳದ ವ್ಯಕ್ತಿ ಎಷ್ಟೇ ಗೌರವ ಗಳಿಸಿದ್ರೂ,+ನಾಶವಾಗಿ ಹೋಗೋ ಪ್ರಾಣಿಗಿಂತ ಅವನೇನೂ ದೊಡ್ಡವನಲ್ಲ.

ಪಾದಟಿಪ್ಪಣಿ

ಅಥವಾ “ತಿಳುವಳಿಕೆಯ ಮಾತುಗಳ.”
ಅಕ್ಷ. “ತಪ್ಪುಗಳಿಂದ.”
ಅಕ್ಷ. “ಗುಂಡಿಯನ್ನ.”
ಅಥವಾ “ಶಕ್ತಿಯಿಂದ.”