ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2014

ಈ ಸಂಚಿಕೆಯಲ್ಲಿ ಡಿಸೆಂಬರ್‌ 29, 2014ರಿಂದ ಫೆಬ್ರವರಿ 1, 2015ರ ವರೆಗಿನ ಅಧ್ಯಯನ ಲೇಖನಗಳಿವೆ.

ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ

ಯೇಸುವಿನ ಪುನರುತ್ಥಾನವಾಗಿದೆ ಎಂದು ತೋರಿಸುವ ನಾಲ್ಕು ರುಜುವಾತುಗಳು. ಆತನು ಜೀವದಿಂದಿದ್ದಾನೆಂಬ ನಿಜಾಂಶ ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?

ನಾವು ಪರಿಶುದ್ಧರಾಗಿರಬೇಕು—ಏಕೆ?

ಬೈಬಲಿನ ಯಾಜಕಕಾಂಡ ಪುಸ್ತಕ ಓದುವಾಗ ನಿಮಗೆ ಗಲಿಬಿಲಿಯಾಗಿದೆಯೇ? ಅದನ್ನು ಓದುವುದು ಬೇಸರಹುಟ್ಟಿಸುತ್ತದೆಯೇ? ಈ ಪುಸ್ತಕದಿಂದ ತೆಗೆಯಲಾದ ಆಧ್ಯಾತ್ಮಿಕ ರತ್ನಗಳು ನೀವು ಸಲ್ಲಿಸುವ ಆರಾಧನೆ ಪರಿಶುದ್ಧವಾಗಿರುವಂತೆ ನಿಮಗೆ ಸಹಾಯಮಾಡಬಲ್ಲದು.

ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು

ರಾಜಿಮಾಡಿಕೊಳ್ಳದೇ ಇರುವುದು, ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವುದು, ಗಟ್ಟಿಯಾದ ಆಧ್ಯಾತ್ಮಿಕ ಆಹಾರ ಸೇವಿಸುವುದು—ಇವೆಲ್ಲದ್ದರಲ್ಲಿ ಇರುವ ಒಂದು ಸಾಮಾನ್ಯ ಅಂಶ ಯಾವುದು?

‘ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಆ ಜನರು’

ಒಳ್ಳೇ ಮನಸ್ಸಿನಿಂದ ತನ್ನನ್ನು ಆರಾಧಿಸುವ ಯಾವುದೇ ಧರ್ಮದ ವ್ಯಕ್ತಿಯನ್ನು ದೇವರು ಸ್ವೀಕರಿಸುತ್ತಾನೋ?

“ಈಗ ದೇವರ ಜನರಾಗಿದ್ದೀರಿ”

ನಾವು ಹೇಗೆ ‘ದೇವರ ಜನರು’ ಆಗಬಹುದು ಮತ್ತು ಆತನ ಜನರಾಗಿಯೇ ಉಳಿಯಬಹುದು?

ವಾಚಕರಿಂದ ಪ್ರಶ್ನೆಗಳು

ಪ್ರತಿ ಸಭೆಯಲ್ಲಿ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ಹೇಗೆ ನೇಮಿಸಲಾಗುತ್ತದೆ? ಪ್ರಕಟನೆ 11ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಇಬ್ಬರು ಸಾಕ್ಷಿಗಳು ಯಾರು?

ನಮ್ಮ ಸಂಗ್ರಹಾಲಯ

ಅರುಣೋದಯದ ನಾಡಲ್ಲಿ ಬೆಳಕು ಹರಿಯುತ್ತದೆ

“ಜೇಹು ಬಂಡಿ” ಎಂದು ಕರೆಯಲಾಗುತ್ತಿದ್ದ ವಿಶೇಷ ವಾಹನಗಳು ಜಪಾನ್‍ನಲ್ಲಿ ರಾಜ್ಯದ ಸುವಾರ್ತೆ ಸಾರುವ ಕೆಲಸದಲ್ಲಿ ತುಂಬ ಸಹಾಯ ಮಾಡಿವೆ.